೫೦ ಸಂಚಿಕೆಯನ್ನು ಪೂರ್ಣಗೊಳಿಸಿರುವ ಹರ ಹರ iಹಾದೇವತಂಡದೊಂದಿಗೆ ಸ್ಟಾರ್ ಸುವರ್ಣ ತಾರೆಗಳು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲು ಸಿದ್ಧರಾಗಿದ್ದಾರೆ.
ಈಗಾಗಲೇಕರುನಾಡಜನತೆಯ ಮನೆ ಮನಗಳಲ್ಲಿ ಹೆಸರುವಾಸಿಯಾಗಿರುವ ಹರ ಹರ ಮಹಾದೇವಮತ್ತಷ್ಟು ವೀಕ್ಷಕರಿಗೆ ಹತ್ತಿರವಾಗಲು ಬೃಹತ್ ವೇದಿಕೆಯ ಮುಖಾಂತರಜನರ ಬಳಿ ಬರುತ್ತಿದ್ದಾರೆ. ವೈವಿಧ್ಯತೆ,ವೈಶಿಷ್ಠತೆ,ವಿಶೇಷತೆ ಮತ್ತು ವೈಭವತೆಯಿಂದಕೂಡಿದ ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಹಾಡು ನೃತ್ಯಗಳು ಜನಮನಸೆಳೆಯಲಿವೆ.
ಈ ಮಹಾದೇವನಜೊತೆ ಸ್ಟಾರ್ ಸುವರ್ಣ ವಾಹಿನಿಯ ಪರಿವಾರದ ಸದಸ್ಯರುಕೂಡಎಲ್ಲರನ್ನುರಂಜಿಸಲಿದ್ದಾರೆ.
ಬೆಂಗಳೂರಿನ ವಿಜಯನಗರದಗೋವಿಂದರಾಜನಗರದ ಬಾಲಗಂಗಾಧರ ಮೈದಾನದಲ್ಲಿಇದೇ ಸೋಮವಾರ ಸಂಜೆ ೬ಗಂಟೆಗೆ ನಡೆಯಲಿರುವ ವಿಜ್ರಂಭಣೆಯ ಈ ಕಾರ್ಯಕ್ರಮಕ್ಕೆ ಆಗಮಿಸಲು ಉಚಿತ ಪ್ರವೇಶವಿದ್ದು ಸರ್ವರಿಗೂ ಆಗಮಿಸಲು ಸ್ಟಾರ್ ಸುವರ್ಣವಾಹಿನಿ ಆಮಂತ್ರಿಸುತ್ತದೆ.